ಸುದೀಪ್ ಸದ್ಯ `ಕಿಚ್ಚ 46`ಎಂಬ ತಾತ್ಕಾಲಿಕ ಶೀರ್ಷಿಕೆಯ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ನಡುವೆ ಅವರ ಮುಂದಿನ ಸಿನಿಮಾವನ್ನು ಆರ್ ಚಂದ್ರು ನಿರ್ಮಾಣ ಮತ್ತು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ.
ಸುದೀಪ್ ಶನಿವಾರ ತಮ್ಮ 50 ನೇ ಹುಟ್ಟುಹಬ್ಬವನ್ನು ತಮ್ಮ ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬದ ನಡುವೆ ಆಚರಿಸಲು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಒಂದೆರಡು ಚಿತ್ರಗಳನ್ನು ಘೋಷಿಸುವ ಸಾಧ್ಯತೆಯಿದೆ ಮತ್ತು ಮೂಲಗಳನ್ನು ನಂಬಿದರೆ, ಸುದೀಪ್ ಅವರ ಮುಂದಿನ ಚಿತ್ರ `ಕಿಚ್ಚ 47` ಅನ್ನು ಆರ್ ಚಂದ್ರು ನಿರ್ಮಿಸಿ ನಿರ್ದೇಶಿಸಲಿದ್ದಾರೆ.
ನಟ ಈ ಹಿಂದೆ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಆರ್ ಚಂದ್ರು ಅವರ `ಕಬ್ಜಾ` ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆರ್ ಚಂದ್ರು ಅವರ ಕೆಲಸದಿಂದ ಸುದೀಪ್ ತುಂಬಾ ಪ್ರಭಾವಿತರಾಗಿದ್ದಾರೆ ಎನ್ನಲಾಗಿದೆ ಅವರೊಂದಿಗೆ ಕೆಲಸ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಚಿತ್ರಕ್ಕೆ `ಬಾಹುಬಲಿ` ಖ್ಯಾತಿಯ ವಿಜಯೇಂದ್ರ ಪ್ರಸಾದ್ ಅವರ ಕಥೆ ಮತ್ತು ಚಿತ್ರಕಥೆ ಇದೆ ಎನ್ನಲಾಗಿದೆ. ಪ್ಯಾನ್ ಇಂಡಿಯನ್ ಮಟ್ಟದಲ್ಲಿ ತಯಾರಾಗುವ ಮತ್ತೊಂದು ಚಿತ್ರ ಇದಾಗಿದೆ.
`ಕಿಚ್ಚ 46` ಶೀರ್ಷಿಕೆಯನ್ನು ಸೆಪ್ಟೆಂಬರ್ 02 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಘೋಷಿಸಲಾಗುವುದು. ಪ್ಯಾನ್ ಇಂಡಿಯನ್ ಚಲನಚಿತ್ರವನ್ನು ವಿಜಯ್ ಕಾತಿಕೇಯ ಅವರು ಚಿತ್ರಕಥೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ ಮತ್ತು ಹಿರಿಯ ಕಾಲಿವುಡ್ ನಿರ್ಮಾಪಕ ಕಲೈಪ್ಪುಲಿ ಎಸ್ ಥಾನು ನಿರ್ಮಿಸಿದ್ದಾರೆ.